ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಒಂದು ಲೇಖನದಲ್ಲಿ ನಾವು ರೇಷನ್ ಕಾರ್ಡ್ ಕುರಿತು ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ ನೋಡಿ ರಾಜ್ಯದಲ್ಲಿ 8 ಲಕ್ಷಕ್ಕೂ ಹೆಚ್ಚು ರೇಷನ್ ಕಾರ್ಡ್ ಗಳು ರದ್ದಾಗಿವೆ.
ನಿಮಗೆಲ್ಲ ತಿಳಿದಿರುವ ಹಾಗೆ ರೇಷನ್ ಕಾರ್ಡ್ ತಂದಿರುವ ಮುಖ್ಯ ಉದ್ದೇಶವೇ ಬಡತನ ನಿರ್ಮೂಲನೆ ಮತ್ತು ಸಮಾಜದಲ್ಲಿ ಸಮಾನತೆ ತರಲು ಸರ್ಕಾರಗಳು ಹಲವು ವರ್ಷಗಳಿಂದ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿವೆ.
ಅಕ್ಕಿ, ಗೋಧಿ, ಎಣ್ಣೆ, ಸಕ್ಕರೆ ಮುಂತಾದ ಅಗತ್ಯ ವಸ್ತುಗಳನ್ನು ಅಗ್ಗದ ದರದಲ್ಲಿ ನೀಡುವ ರೇಷನ್ ಕಾರ್ಡ್ ವ್ಯವಸ್ಥೆ ಅದರಲ್ಲೊಂದು ಪ್ರಮುಖ ಅಂಶ ಅಂತ ಹೇಳಬಹುದು. ಈ ವ್ಯವಸ್ಥೆಯಲ್ಲೂ ಬಿಪಿಎಲ್ (Below Poverty Line) ಕಾರ್ಡ್ ಅತೀ ಮುಖ್ಯ ಸಂಗತಿ ಯಾಗಿದೆ.
ಆದರೆ, ಕಾಲ ಕಳೆದಂತೆ ದುರುಪಯೋಗಗಳು ಕೂಡ ಹೆಚ್ಚಾಗುತ್ತೆ ಹೀಗಾಗಿ ಈ ವ್ಯವಸ್ಥೆಯಲ್ಲೂ ಭ್ರಷ್ಟಾಚಾರ, ವಂಚನೆ ಮತ್ತು ಅನರ್ಹ ಫಲಾನುಭವಿಗಳ ಪ್ರವೇಶ ಹೆಚ್ಚಿದೆ.
ಇದನ್ನು ಓದಿ:ಪ್ರಧಾನಮಂತ್ರಿ ಆವಾಸ್ ಯೋಜನೆ 2025.! ಸರ್ಕಾರದಿಂದ ಸಿಗಲಿದೆ ಉಚಿತ ಮನೆ ಭಾಗ್ಯ.!!
ಇತ್ತೀಚಿನ ಪರಿಶೀಲನೆಯ ಮೂಲಕ ರಾಜ್ಯ ಸರ್ಕಾರವು 8 ಲಕ್ಷಕ್ಕೂ ಹೆಚ್ಚು ನಕಲಿ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಿರುವುದು ದೊಡ್ಡ ನಿರ್ಧಾರವೆಂದು ಹೇಳಬಹುದು. ಇದು ಬಡ ಕುಟುಂಬಗಳಿಗೆ ನ್ಯಾಯ ದೊರಕಿಸಲು ಸರ್ಕಾರ ಕೈಗೊಂಡಿರುವ ಪ್ರಮುಖ ಕ್ರಮ ಅಥವಾ ಕಾರ್ಯ ಎಂದು ಹೇಳಬಹುದು.
ಬಿಪಿಎಲ್ ಕಾರ್ಡ್ ಎಂದರೇನು? ಅಥವಾ ಅದರ ಮಹತ್ವ ಏನು.?
Table of Contents
ಬಿಪಿಎಲ್ ಕಾರ್ಡ್ ಎಂದರೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೀಡುವ ಗುರುತಿನ ದಾಖಲೆ ಎಂದು ಹೇಳಬಹುದು. ಇದು ಕೇವಲ ಒಂದು ಪೇಪರ್ವರ್ಕ್ ಅಲ್ಲ, ಬದಲಾಗಿ ಸಾವಿರಾರು ಬಡ ಕುಟುಂಬಗಳ ಜೀವನದ ವರದನ ಎಂದು ಹೇಳಬಹುದು.
ಬಿಪಿಎಲ್ ಕಾರ್ಡ್ ಮೂಲಕ ದೊರೆಯುವ ಪ್ರಮುಖ ಸೌಲಭ್ಯಗಳ ಏನು ತಿಳಿದುಕೊಳ್ಳಿ.?

- ಧಾನ್ಯಗಳನ್ನು ಅತ್ಯಂತ ಕಡಿಮೆ ದರದಲ್ಲಿ ಪಡೆಯುವ ಅವಕಾಶ ಸಿಗುತ್ತೆ.
- ವಿದ್ಯಾರ್ಥಿಗಳಿಗೆ ಸರ್ಕಾರಿ ವಿದ್ಯಾರ್ಥಿವೇತನಗಳಲ್ಲಿ ಆದ್ಯತೆ ದೊರೆಯುತ್ತೆ.
- ಗೃಹ ನಿರ್ಮಾಣ, ಪಿಂಚಣಿ ಯೋಜನೆಗಳಲ್ಲಿ ಲಾಭ
- ಆಯುಷ್ಮಾನ್ ಭಾರತ, ಆರೋಗ್ಯ ಕಾಳಜಿ ಯೋಜನೆಗಳಲ್ಲಿ ಉಚಿತ/ಕಡಿಮೆ ದರದ ಚಿಕಿತ್ಸೆಗೆ ಸಂಪೂರ್ಣ ಉಚಿತವಾಗಿರುತ್ತೆ.
- ಸಣ್ಣಮಟ್ಟದ ಸಾಲ, ಸ್ವಯಂ ಉದ್ಯೋಗ ಯೋಜನೆಗಳಲ್ಲಿ ಆದ್ಯತೆ ಹಾಗೂ ಸಪೋರ್ಟ್ ಕೂಡ ಒದಗಿಸುತ್ತೆ ಈ ಕಾರ್ಡ್
ನಕಲಿ ಬಿಪಿಎಲ್ ಕಾರ್ಡ್ ಸಮಸ್ಯೆಯ ಮೂಲ ತಿಳಿದುಕೊಳ್ಳಿ:
1. ಸುಳ್ಳು ಮಾಹಿತಿ ನೀಡುವುದರ ಮೂಲಕ:
ಹಲವಾರು ಕುಟುಂಬಗಳು ತಮ್ಮ ನಿಜವಾದ ಆದಾಯಕ್ಕಿಂತ ಕಡಿಮೆ ಆದಾಯವನ್ನ ತೋರಿಸಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿವೆ. ಉದಾಹರಣೆಗೆ, ₹5 ಲಕ್ಷ ಆದಾಯವಿರುವ ಕುಟುಂಬವು ಕೇವಲ ₹40,000 ಎಂದು ತೋರಿಸಿ ಕಾರ್ಡ್ ಪಡೆಯುವ ಪ್ರಕರಣಗಳು ಇತ್ತೀಚಿಗೆ ಬಹಳ ಬೆಳಕಿಗೆ ಬಂದಿದೆ ಇಂಥವರನ್ನ ರಾಜ್ಯ ಸರ್ಕಾರ ಹಿಡಿದು ಹಿಡಿದು ರದ್ದು ಮಾಡುತ್ತಿವೆ.
2. ರಾಜಕೀಯ ಒತ್ತಡ ಮತ್ತು ಶಿಫಾರಸು ಮೇರೆಗೆ:
ಕೆಲ ಸಂದರ್ಭಗಳಲ್ಲಿ ಪ್ರಭಾವಿ ವ್ಯಕ್ತಿಗಳ ಶಿಫಾರಸಿನಿಂದ ಅನರ್ಹರಿಗೆ ಕಾರ್ಡ್ ನೀಡಲಾಗಿದೆ ಇದು ಇನ್ನೂ ಮಾಹಿತಿ ಸಿಕ್ಕಿಲ್ಲ ಮೂಲಗಳಿಂದ ನಿಮಗೆ ತಿಳಿಸಲಾಗಿದೆ. ಇದರ ಬಗ್ಗೆ ನಿಮಗೇನು ಅನಿಸುತ್ತೆ ಕಾಮೆಂಟ್ ಮಾಡಿ ತಿಳಿಸಿ.
3. ಅಧಿಕಾರಿಗಳ ನಿರ್ಲಕ್ಷ ವಹಿಸುವಿಕೆ:
ಪರಿಶೀಲನೆ ಸರಿಯಾಗಿ ನಡೆಯದೆ ಇರುವುದರಿಂದ ನಕಲಿ ಕಾರ್ಡ್ಗಳು ಸುಲಭವಾಗಿ ಹೊರಬಂದಿವೆ ಹಾಗೆ ಇದರ ಲಾಭವನ್ನು ಕೂಡ ಪಡೆದುಕೊಂಡಿದೆ.
4. ತಂತ್ರಜ್ಞಾನ ಬಳಕೆಯ ಕೊರತೆ
ಹಿಂದಿನ ದಿನಗಳಲ್ಲಿ ಎಲ್ಲ ದಾಖಲೆಗಳು ಹಸ್ತಚಾಲಿತವಾಗಿದ್ದುದರಿಂದ ವಂಚನೆ ಸುಲಭವಾಗಿತ್ತು ಆದರೆ ಇಂದಿನ ದಿನಮಾನಗಳಲ್ಲಿ ಡಿಜಿಟಲ್ ಆಗಿವೆ, ಪ್ರತಿಯೊಂದು ಚೆಕ್ ಮಾಡಿ ನಿಮಗೆ ರೇಷನ್ ಕಾರ್ಡ್ ಒದಗಿಸುತ್ತಾರೆ ನೀವು ಅರ್ಹರು ಅಥವಾ ಅನರ್ಹರು ಎಂದು ಮೊದಲು ಅವರಿಗೆ ತಿಳಿಯುತ್ತೆ ನಂತರ ನೀವು ಅರ್ಹರಾಗಿದ್ದರೆ ನಿಮಗೆ ರೇಷನ್ ಕಾರ್ಡ್ ಬರುತ್ತೆ ಅನರ್ಹರು ಎಂದಾದರೆ ರೇಷನ್ ಕಾರ್ಡ್ ಬರುವುದಿಲ್ಲ.
ಸರ್ಕಾರ ಕೈಗೊಂಡಿರುವ ಪರಿಶೀಲನೆ ಇದು:
ಇತ್ತೀಚೆಗೆ ಸರ್ಕಾರವು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ದೊಡ್ಡ ಮಟ್ಟದ ಪರಿಶೀಲನೆ ಮಾಡುತ್ತಿದೆ ಇದರ ಕುರಿತು ಮಾಹಿತಿ ಈ ಕೆಳಗಿನಂತಿದೆ ನೋಡಿ.
ಪರಿಶೀಲನೆಯ ಪ್ರಮುಖ ಅಂಶಗಳು:
- ಆಧಾರ್ ಲಿಂಕಿಂಗ್ ಕಡ್ಡಾಯ – ಪ್ರತಿಯೊಬ್ಬರ ರೇಷನ್ ಕಾರ್ಡ್ ಗಳನ್ನು ಆಧಾರ್ ಕಾರ್ಡ್ ಸಂಖ್ಯೆಗೆ ಜೋಡಿಸಲಾಯಿತು ಅಂದರೆ ನಿಮ್ಮ ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲಾಗಿತ್ತು.
- ಆದಾಯ ತೆರಿಗೆ ದಾಖಲೆಗಳ ಹೋಲಿಕೆ – ಕಾರ್ಡ್ ಹೊಂದಿರುವವರ ಆದಾಯವನ್ನು ನೇರವಾಗಿ ಪರಿಶೀಲಿಸಲಾಯಿತು. ನಿಮ್ಮ ಬ್ಯಾಂಕ್ ಖಾತೆಗೆ ಪ್ಯಾನ್ ಕಾರ್ಡ್ ಲಿಂಕ್ ಆಗಿರುತ್ತೆ. ಅದರ ಮೂಲಕ ಆದಾಯ ತೆರಿಗೆ ದಾಖಲೆಯನ್ನು ಆರಾಮಾಗಿ ಕಂಡುಹಿಡಿಯುತ್ತಾರೆ.
- ಆಸ್ತಿ ಮಾಹಿತಿ ಪರಿಶೀಲನೆ – ಮನೆ, ಜಮೀನು, ವಾಹನ ದಾಖಲೆಗಳನ್ನು ಪರಿಶೀಲಿಸಲಾಯಿತು.
- ವಿದ್ಯುತ್ ಮತ್ತು ನೀರಿನ ಬಳಕೆ ವಿಶ್ಲೇಷಣೆ – ಒಂದು ಕುಟುಂಬ ನಿಜವಾಗಿಯೂ ಬಡವೋ ಇಲ್ಲವೋ ಎಂದು ಅಂದಾಜಿಸಲಾಗುತ್ತೆ.
ಇದರ ಫಲಿತಾಂಶ..?
ಈ ಪರಿಶೀಲನೆಯಿಂದ ಸುಮಾರು 8 ಲಕ್ಷಕ್ಕೂ ಹೆಚ್ಚು ನಕಲಿ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲಾಗಿದೆ ಹಾಗೆ ಇದರಿಂದ ಆಗುವ ಲಾಭಗಳೇನು ಮತ್ತು ಇನ್ನಿತರೆ ಮಾಹಿತಿ ತಿಳಿದುಕೊಳ್ಳಿ.
ಲಾಭಗಳು
- ಅರ್ಹ ಬಡವರಿಗೆ ನೆರವು – ನಿಜವಾದ ಬಡ ಕುಟುಂಬಗಳಿಗೆ ಧಾನ್ಯ, ಸಕ್ಕರೆ ಮುಂತಾದವು ತಲುಪುತ್ತವೆ.
- ಸರ್ಕಾರಕ್ಕೆ ಹಣದ ಉಳಿತಾಯ – ಕೋಟ್ಯಂತರ ರೂಪಾಯಿ ನಕಲಿ ಕಾರ್ಡ್ಗಳಿಗೆ ಹೋಗುತ್ತಿದ್ದ ವೆಚ್ಚ ಉಳಿಯುತ್ತದೆ.
- ಸಮಾಜದಲ್ಲಿ ನ್ಯಾಯ ಮತ್ತು ಸಮಾನತೆ – ನಿಜವಾಗಿಯೂ ಅಗತ್ಯವಿರುವವರಿಗೆ ಮಾತ್ರ ಸೌಲಭ್ಯ ತಲುಪುತ್ತದೆ.
- ಪಾರದರ್ಶಕತೆ ಹೆಚ್ಚಳ – ಆಧಾರ್ ಆಧಾರಿತ ವ್ಯವಸ್ಥೆಯಿಂದ ಭವಿಷ್ಯದಲ್ಲಿ ವಂಚನೆ ತಡೆಯಬಹುದು.
ನಕಲಿ ಕಾರ್ಡ್ ಹೊಂದಿದವರ ವಿರುದ್ಧ ಕ್ರಮ ಕೈಗೊಳ್ಳುವಿಕೆ:

ಸರ್ಕಾರವು ಕೇವಲ ಕಾರ್ಡ್ ರದ್ದು ಮಾಡುವುದರಲ್ಲಿ ನಿಂತಿಲ್ಲ ನಕಲಿ ಕಾಡುಗಳನ್ನು ಹೊಂದಿರುವವರಿಗೆ ಕ್ರಮ ಕೈಗೊಳ್ಳಲು ನಿಂತಿದ್ದಾರೆ.
- ತಪ್ಪು ಮಾಹಿತಿ ನೀಡಿದವರಿಗೆ ದಂಡ ವಿಧಿಸಲಾಗುತ್ತಿದೆ.
- ಕೆಲವರ ವಿರುದ್ಧ ಕಾನೂನು ಕ್ರಮ ಕೂಡ ಕೈಗೊಳ್ಳಲಾಗುತ್ತಿದೆ.
- ಭವಿಷ್ಯದಲ್ಲಿ ಯಾವುದೇ ಸರ್ಕಾರಿ ಯೋಜನೆಗೆ ಅರ್ಜಿ ಸಲ್ಲಿಸಲು ನಿಷೇಧ ಹೇರಲಾಗಬಹುದು.
- ಇದರ ಕುರಿತು ಮಾಹಿತಿ ತಿಳಿದುಕೊಳ್ಳ ಬೇಕಾದರೆ ಮೂಲಗಳಿಂದ ತಿಳಿದುಕೊಳ್ಳಿ ಏಕೆಂದರೆ ಇಂತಹ ತಪ್ಪು ಮಾಡಿದವರಿಗೆ ಆ ದೇವರೇ ಗತಿ ಆದರೆ ಇಂಥ ಸಂದರ್ಭದಲ್ಲಿ ಇನ್ನು ಹೆಚ್ಚಿನ ಮಟ್ಟದಲ್ಲಿ ಸರ್ಕಾರವೇ ನಿಂತು ಏನು ನಿಷೇಧ ಮಾಡಿಲ್ಲ ಸಂಪೂರ್ಣವಾಗಿ ನಿಷೇಧ ಮಾಡಿದರೆ ನಿಮಗೂ ಸರ್ಕಾರದ ಯಾವುದೇ ತರಹದ ಯೋಜನೆಗಳು ಸಿಗುವುದಿಲ್ಲ.
ನಿಜವಾದ ಬಡವರಿಗೆ ಭರವಸೆ ಸಿಕ್ಕಂತಾಗಿದೆ:
ಬಿಪಿಎಲ್ ಕಾರ್ಡ್ ರದ್ದುಪಡಿಸುವುದು ನಿಜವಾದ ಬಡವರ ಹಕ್ಕನ್ನು ಕಸಿವುದ ಅಂತಲ್ಲ ಇದು ನೋಡಿ ಸರ್ಕಾರ ಹೇಳಿರುವಂತೆ ತಪ್ಪಾಗಿ ಯಾರದ್ದಾದರೂ ಕಾರ್ಡ್ ರದ್ದು ಆಗಿದ್ದರೆ, ಅವರು ಹೊಸ ಅರ್ಜಿ ಸಲ್ಲಿಸಿ ಸರಿಯಾದ ದಾಖಲೆಗಳ ಮೂಲಕ ಮತ್ತೆ ಕಾರ್ಡ್ ಪಡೆಯಬಹುದು ಎಂದು ತಿಳಿಸಿದೆ ಇದಕ್ಕೆ ನಿಮ್ಮ ಅನಿಸಿಕೆ ಏನೆಂಬುವುದು ಕಮೆಂಟ್ ಮಾಡಿ ತಿಳಿಸಿ.
ಜನರ ಪ್ರತಿಕ್ರಿಯೆಗಳು ಹೇಗಿವೆ.?
- ಅರ್ಹ ಬಡವರು – ಸಂತೋಷ ವ್ಯಕ್ತಪಡಿಸಿ “ಇದೀಗ ನಮಗೂ ಸೌಲಭ್ಯ ತಲುಪುತ್ತದೆ” ಎನ್ನುತ್ತಿದ್ದಾರೆ.
- ಅನರ್ಹ ಕಾರ್ಡ್ ಹೊಂದಿದವರು – ತಮ್ಮ ಕಾರ್ಡ್ ರದ್ದು ಆಗಿರುವುದರಿಂದ ಅಸಮಾಧಾನಗೊಂಡಿದ್ದಾರೆ.
- ಸಾಮಾನ್ಯ ನಾಗರಿಕರು – ಈ ಕ್ರಮದಿಂದ ಸಮಾಜದಲ್ಲಿ ನ್ಯಾಯ ಸಾಧನೆ ಸಾಧ್ಯವೆಂದು ನಂಬಿದ್ದಾರೆ.
ಸಮಾಜದ ಮೇಲೆ ಪರಿಣಾಮ ಹೇಗಿದೆ..?
ಸಮಾಜದ ಮೇಲೆ ಪರಿಣಾಮ ಹೇಗಿದೆ ಮಾಹಿತಿಗೆ ಈ ಕೆಳಗಡೆ ಇದೆ ನೋಡಿ.
- ನಿಜವಾದ ಬಡವರಿಗೆ ಶಿಕ್ಷಣ, ಆರೋಗ್ಯ, ಆಹಾರ ಭದ್ರತೆ ದೊರಕುತ್ತದೆ.
- ಗ್ರಾಮೀಣ ಬಡತನ ಕಡಿಮೆಯಾಗಲು ಸಹಾಯವಾಗುತ್ತದೆ.
- ಭ್ರಷ್ಟಾಚಾರ ಕಡಿಮೆಯಾಗುತ್ತದೆ.
- ಜನರಲ್ಲಿ ಸರ್ಕಾರದ ಮೇಲಿನ ವಿಶ್ವಾಸ ಹೆಚ್ಚುತ್ತದೆ.
ಭವಿಷ್ಯದ ಸರ್ಕಾರದ ಯೋಜನೆಗಳು..?
ಈ ಕೆಳಗಡೆ ಪ್ರತಿಯೊಬ್ಬರಿಗೂ ಸಹಾಯವಾಗಲೆಂದು ಭವಿಷ್ಯದ ಸರ್ಕಾರದ ಯೋಜನೆಗಳು ಏನು ಎಂಬ ಮಾಹಿತಿ ಒದಗಿಸಲಾಗಿದೆ ಗಮನಿಸಿ.
- ಪ್ರತಿವರ್ಷ ಆದಾಯ ಮತ್ತು ಆಸ್ತಿ ವಿವರಗಳನ್ನು ನವೀಕರಿಸುವುದು
- ಗ್ರಾಮ ಪಂಚಾಯತ್ ಮಟ್ಟದಲ್ಲಿ ಪರಿಶೀಲನಾ ಸಮಿತಿಗಳನ್ನು ರಚಿಸುವುದು
- ದೂರು ಸಲ್ಲಿಸಲು ಆನ್ಲೈನ್ ಪೋರ್ಟಲ್ ಸೃಷ್ಟಿಸುವುದು
- ಬ್ಲಾಕ್ಚೈನ್ ತಂತ್ರಜ್ಞಾನ ಬಳಕೆ ಮಾಡುವ ಯೋಚನೆ
ಇತರ ರಾಜ್ಯಗಳ ಅನುಭವ ಹೇಗಿದೆ..?

ಇನ್ನಿದರೆ ಬೇರೆ ರಾಜ್ಯಗಳಲ್ಲಿ ಇದೇ ತರಹದ ಸುಳ್ಳು ದಾಖಲೆಗಳನ್ನು ನೀಡಿ ರೇಷನ್ ಕಾರ್ಡ್ ಪಡೆದುಕೊಳ್ಳುವುದು ಪತಿಯಾಗಿದೆ ಇವರಿಗೆ ಬೆಂಡೆತ್ತಲು ಸರ್ಕಾರ ನಿಂತಿದೆ. ಉದಾಹರಣೆಗೆ ತಿಳಿಸುವುದಾದರೆ ನಮ್ಮ ಅಕ್ಕಪಕ್ಕದ ರಾಜಗಳಾಗಿರುವಂತಹ ಮಾಹಿತಿಯು ಈ ಕೆಳಗಿನಂತೆ ವಿವರಿಸಲಾಗಿದೆ ಗಮನಿಸಿ.
- ತಮಿಳುನಾಡಿನಲ್ಲಿ 5 ಲಕ್ಷಕ್ಕೂ ಹೆಚ್ಚು ಕಾರ್ಡ್ಗಳನ್ನು ರದ್ದು ಮಾಡಲಾಗಿದೆ.
- ಮಹಾರಾಷ್ಟ್ರದಲ್ಲಿ ಆಧಾರ್ ಲಿಂಕಿಂಗ್ ಮೂಲಕ ಸಾವಿರಾರು ನಕಲಿ ಕಾರ್ಡ್ಗಳನ್ನು ಪತ್ತೆ ಹಚ್ಚಲಾಗಿದೆ.
- ಹಾಗೂ ಇನ್ನು ಇತರೆ ಮಾಹಿತಿಗಳು ತುಂಬಿವೆ ಇಂಟರ್ನೆಟ್ ನಲ್ಲಿ ನೀವು ಸರ್ಚ್ ಮಾಡಿ ತಿಳಿಯಬಹುದು ಇದರ ಕುರಿತು ಇನ್ನು ಅಧಿಕೃತ ಮಾಹಿತಿ ನಿಮಗೆ ಬೇಕು ಎಂದಾದರೆ ಇಂಟರ್ನೆಟ್ ನಲ್ಲಿ ಮಾಹಿತಿಗಳು ತುಂಬಿ ಹೋಗಿವೆ ಅಥವಾ ಬೇಡಪ್ಪ ಎಂದಾದರೆ ಲೇಖನವನ್ನ ಕೊನೆವರೆಗೂ ಓದಿ.
ನಮ್ಮ ಕೊನೆಯ ಮಾತು
8 ಲಕ್ಷಕ್ಕೂ ಹೆಚ್ಚು ನಕಲಿ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸುವುದು ಒಂದು ಇತಿಹಾಸ ನಿರ್ಮಾಣದಂತೆಯೇ ದೊಡ್ಡ ಹೆಜ್ಜೆ ಇಟ್ಟಿದೆ ಎಂದು ಹೇಳಬಹುದು ನೋಡಿ ಇದು ಕೇವಲ ಆಡಳಿತಾತ್ಮಕ ಕ್ರಮವಲ್ಲ, ಬದಲಾಗಿ ಬಡ ಕುಟುಂಬಗಳ ಬದುಕನ್ನು ಬದಲಾಯಿಸುವ ನಿರ್ಧಾರ ಎಂದು ಹೇಳಬಹುದು.
ಅರೆ ಇದೇನಿದು ಬಡವರ ಕುಟುಂಬಗಳು ತಮ್ಮ ಬದುಕನ್ನ ಬದಲಾಯಿಸಲು ಇದನ್ನು ನಿರ್ಧಾರ ಎಂದು ನಿಮ್ಮ ಪ್ರಶ್ನೆ ಇದೆಯೇ ಹೌದು ನೋಡಿ ನಿಮಗೆ ಸಿಗಬೇಕಾಗಿರುವ ಆಹಾರ ಧಾನ್ಯಗಳು ಯೋಚನೆಗಳು ಇನ್ನಾವುದೇ ಬೇರೆ ದವರು ಬಂದು ಅದಕ್ಕೆ ಅನರ್ಹರೇ ಆದರೂ ಕೂಡ ಅರ್ಹರೆಂದು ಭಾವಿಸಿಕೊಂಡು ಆ ರೀತಿ ದಾಖಲೆಗಳನ್ನು ಸೃಷ್ಟಿಸಿ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದರೆ ಇನ್ನುಳಿದ ಬಡವರಿಗೆ ಇದರಿಂದ ತೊಂದರೆ ಅದೆಂಗೆಂದರೆ ನೋಡಿ ಇಂಥವರು ಗೊತ್ತಾದರೆ ಸರಕಾರ ಇಂಥ ಋಣ ಹಿಡಿಯಲು ರೇಷನ್ ಕಾರ್ಡ್ಗಳಿಗೆ ಲಿಂಕ್ ಮಾಡಲು ಮುಂದಾಗುತ್ತೆ ಆಧಾರ್ ಇಂಥ ಸಂದರ್ಭದಲ್ಲಿ ಕೆಲವೊಂದಿಷ್ಟು ಬಡವರ ರೇಷನ್ ಕಾರ್ಡ್ ಗಳು ಕೂಡ ಹೋಗಬಹುದು.
FAQ (ಹೆಚ್ಚಾಗಿ ಕೇಳಲಾಗುವ ಪ್ರಶ್ನೆಗಳು)
1. ಬಿಪಿಎಲ್ ಕಾರ್ಡ್ ಎಂದರೇನು?
ಬಿಪಿಎಲ್ ಕಾರ್ಡ್ ಬಡ ಕುಟುಂಬಗಳಿಗೆ ನೀಡುವ ಗುರುತಿನ ದಾಖಲೆ. ಇದರ ಮೂಲಕ ಅಗ್ಗದ ದರದಲ್ಲಿ ಆಹಾರ ವಸ್ತುಗಳು ಮತ್ತು ಸರ್ಕಾರಿ ಯೋಜನೆಗಳ ಸೌಲಭ್ಯ ದೊರೆಯುತ್ತದೆ.
2. ಯಾರು ಬಿಪಿಎಲ್ ಕಾರ್ಡ್ಗೆ ಪಡೆಯಲು ಅರ್ಹರಾಗಿರುತ್ತಾರೆ..?
ವಾರ್ಷಿಕ ಆದಾಯ ಕಡಿಮೆಯಿರುವವರು, ದೊಡ್ಡ ಆಸ್ತಿ ಇಲ್ಲದವರು, ನಿಜವಾಗಿಯೂ ಬಡವರಾಗಿರುವವರು ಅರ್ಹರಾಗುತ್ತಾರೆ.
3. ನಕಲಿ ಕಾರ್ಡ್ಗಳನ್ನು ಹೇಗೆ ಪತ್ತೆಹಚ್ಚಲಾಗುತ್ತದೆ?
ಆಧಾರ್ ಲಿಂಕಿಂಗ್, ಆದಾಯ ದಾಖಲೆ, ಆಸ್ತಿ ದಾಖಲೆ ಮತ್ತು ವಿದ್ಯುತ್-ನೀರಿನ ಬಿಲ್ ಮಾಹಿತಿಯನ್ನು ಪರಿಶೀಲಿಸುವ ಮೂಲಕ ನಕಲಿ ಕಾರ್ಡ್ ಪತ್ತೆಯಾಗುತ್ತದೆ.
4. ನಕಲಿ ಕಾರ್ಡ್ ಹೊಂದಿದ್ದರೆ ಏನಾಗಬಹುದು ಮುಂದೆ?
ಅಂತಹ ಕಾರ್ಡ್ ತಕ್ಷಣ ರದ್ದು ಮಾಡಲಾಗುತ್ತದೆ. ಕೆಲ ಸಂದರ್ಭಗಳಲ್ಲಿ ದಂಡ ಮತ್ತು ಕಾನೂನು ಕ್ರಮವೂ ಕೈಗೊಳ್ಳಬಹುದು.
5. ಕಾರ್ಡ್ ರದ್ದು ಆದರೆ ಮತ್ತೆ ಪಡೆಯಬಹುದೇ?
ಹೌದು. ತಪ್ಪಾಗಿ ಕಾರ್ಡ್ ರದ್ದು ಆಗಿದ್ದರೆ ಸರಿಯಾದ ದಾಖಲೆಗಳನ್ನು ಸಲ್ಲಿಸಿ ಮತ್ತೆ ಕಾರ್ಡ್ ಪಡೆಯಬಹುದು.
6. ಈ ಕ್ರಮದಿಂದ ನಿಜವಾದ ಬಡವರಿಗೆ ಏನು ಲಾಭ?
ಸರ್ಕಾರದ ನೆರವು ನೇರವಾಗಿ ಅರ್ಹರಿಗೆ ತಲುಪುತ್ತದೆ. ಅಕ್ಕಿ, ಗೋಧಿ ಮುಂತಾದ ವಸ್ತುಗಳನ್ನು ಅಗ್ಗದ ದರದಲ್ಲಿ ಪಡೆಯಲು ಸಾಧ್ಯವಾಗುತ್ತದೆ.
7. ಮುಂದಿನ ದಿನಗಳಲ್ಲಿ ನಕಲಿ ಕಾರ್ಡ್ ಮಾಡುವ ಅವಕಾಶ ಇರುತ್ತದೆಯೇ?
ತಂತ್ರಜ್ಞಾನ ಆಧಾರಿತ ಪಾರದರ್ಶಕ ವ್ಯವಸ್ಥೆಯಿಂದ ಭವಿಷ್ಯದಲ್ಲಿ ನಕಲಿ ಕಾರ್ಡ್ ಮಾಡಲು ಸಾಧ್ಯವಿಲ್ಲದ ಮಟ್ಟಿಗೆ ನಿಯಂತ್ರಣ ಇರಲಿದೆ.
ನೋಡಿ ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಆಧಾರಿತ ಪಾರದರ್ಶಕ ವ್ಯವಸ್ಥೆ ಇರುತ್ತೆ ಭವಿಷ್ಯದಲ್ಲಿ ನೀವು ನಕಲಿ ಕಾರ್ಡ್ ಮಾಡಲು ಸಾಧ್ಯವಿಲ್ಲ ಎಂದು ಹೇಳಬಹುದು ಸಾಧ್ಯಮಟ್ಟಿಗೆ ಇರುವಂತಹ ತಂತ್ರಜ್ಞಾನವನ್ನು ಹೋಲಿಸಿದರೆ.